ಸಂತ ಯೊವಾನ್ನ, ಪ್ರೇಷಿತ ಮತ್ತು ಸುಸಂದೇಶಕರ್ತ

ಯೇಸುವನ್ನು ಶಿಲುಬೆಗೇರಿಸಲಾಗಿದೆ; ಅವರ ಮರಣವಿನ್ನೂ ಸಂಭವಿಸಿಲ್ಲ; ಶಿಲುಬೆಗೇರುವ ಮೊದಲು ಅವರ ಹಿಂದೆ ಅಪಾರವಾಗಿ ಜನರಿರುತ್ತಿದ್ದರು. ಆದರೆ ದಿನ: ಹೃದಯವನ್ನೇ ಹಿಂಡುವಂತಹ ಧಾರುಣ ಸನ್ನಿವೇಷದಲ್ಲಿ ಯೇಸುವಿನ ಬಳಿ ಇದ್ದವರು ಕೆಲವರು ಮಾತ್ರ. ಶಿಲುಬೆಯ ಸನಿಹದಲ್ಲಿ ದುಗುಡದಿಂದ ನಿಂತಿದ್ದರು ಯೇಸುವಿನ ಮಾತೆ. ಅವರ ಜೊತೆಯಲ್ಲಿ ಇದ್ದವರು ಅವರ ಸೋದರಿಯೂ ಕ್ಲೆಯೋಫನ ಹೆಂಡತಿಯೂ ಆದ ಮರಿಯ ಮತ್ತು ಮಗ್ದಲದ ಮರಿಯಹಿಂದಿನ ಮೂರು ವರ್ಷಗಳಿಂದ ಯೇಸುವಿಗೆ ಬೆಂಗಾವಲಂತೆ ಇದ್ದ ಅವರ ಶಿಷ್ಯವರ್ಗ ಅಲ್ಲಿರಲಿಲ್ಲ; ಓರ್ವನನ್ನು ಹೊರತು ಪಡಿಸಿ. ಯೇಸುವೇ ಮುಂತಿಳಿಸಿದಂತೆ ಅವರ ಶಿಷ್ಯವರ್ಗ ದಿಕ್ಕಾಪಾಲಾಗಿ ಚೆದುರಿಹೋಗಿತ್ತು. ಆದರೆ ಅವರ ಆಪ್ತಶಿಷ್ಯ 'ಯೊವಾನ್ನ' ಮಾತ್ರ ಅಲ್ಲಿದ್ದ. ಯೇಸುವನ್ನು ಬಂಧಿಸುವ ಸಮಯದಲ್ಲಿ ಯೊವಾನ್ನನು ಯೇಸುವನ್ನು ಬಿಟ್ಟು ಹೋಗಿದ್ದರೂ ಅನಂತರ ಪೇತ್ರನೊಂದಿಗೆ ಅವನು ಪ್ರಧಾನಯಾಜಕನ ಮನೆಯ ಅಂಗಳಕ್ಕೆ ಬರುತ್ತಾನೆ. ಪ್ರಧಾನಯಾಜಕನ ಪರಿಚಯ ಮೊದಲೇ ಯೊವಾನ್ನನಿಗಿರುತ್ತದೆ. ಹಾಗೆಂದು ತನ್ನ ಸುಸಂದೇಶದಲ್ಲಿ ಅವನು ಹೇಳಿಕೊಂಡಿದ್ದಾನೆ(ಯೊವಾನ್ನ 18:15). ಆದರೆ ತನ್ನ ಹೆಸರನ್ನು ಗುಪ್ತವಾಗಿ ಇರಿಸಿದ್ದಾನೆ. ಸಾಮಾನ್ಯವಾಗಿ, 'ಪ್ರಧಾನಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯ' ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದು ನಿಕೊದೇಮನೇ. ನಿಕೊದೇಮನು ಯೇಸುವಿನ ಶಿಷ್ಯನೇ. ಇವನೊಬ್ಬ ಫರಿಸಾಯ. ಇವನಿಗೆ ಪ್ರಧಾನಯಾಜಕರ ಪರಿಚಯವಿತ್ತುಒಮ್ಮೆ ಪ್ರಧಾನಯಾಜಕರೂ ಮತ್ತು ಫರಿಸಾಯರು ಯೇಸುವನ್ನು ಬಂಧಿಸಲು ಕಾವಲಾಳುಗಳನ್ನು ಕಳುಹಿಸುತ್ತಾರೆ(ಯೊವಾನ್ನ7:32). ಆದರೆ ಯೇಸುವಿನ ಬೋಧನೆಯನ್ನು ಕೇಳಿದ ಅವರು ತಬ್ಬಿಬ್ಬಾಗಿ ಹಿಂದಿರುಗುತ್ತಾರೆ. ಬರಿಗೈಲಿ ಹಿಂದಿರುಗಿದ ಅವರನ್ನು ಕಂಡು ಪ್ರಧಾನಯಾಜಕರು ತರಾಟೆಗೆ ತೆಗದುಕೊಳ್ಳುತ್ತಾರೆ. ಆಗ ನಿಕೊದೇಮನು, "ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ನ್ಯಾಯಸಮ್ಮತವೇ?" ಎಂದು ಪ್ರಧಾನಯಾಜಕರನ್ನು ಪ್ರಶ್ನಿಸುತ್ತಾನೆ. ಇದು ನಿಕೊದೇಮನಿಗೂ ಪ್ರಧಾನಯಾಜಕರಿಗೂ ಇರುವ ಪರಿಚಯವನ್ನು ಎತ್ತಿತೋರಿಸುತ್ತದೆ. ಆದರೆ ನಿಕೊದೇಮನ ಹೆಸರನ್ನು ತನ್ನ ಸುಸಂದೇಶದಲ್ಲಿ ಅಲ್ಲಲ್ಲಿ ಹೆಸರಿಸಿರುವ ಯೊವಾನ್ನನು ಇದ್ದಕ್ಕಿದ್ದಂತೆ ಒಂದು ಮುಖ್ಯಸಂದರ್ಭದಲ್ಲಿ ಅವನ ಹೆಸರನ್ನು ಮರೆಮಾಚಲು ಕಾರಣವೇ ಇಲ್ಲ. ಹಾಗಾಗಿ ಪ್ರಧಾನಯಾಜಕನ ಪರಿಚಯವಿರುವ ಆತ ನಿಕೊದೇಮನಲ್ಲ ನಿಸ್ಸಂದೇಹವಾಗಿ ಯೊವಾನ್ನನೇ ಆಗಿರಬೇಕು ಎಂದೆನಿಸುತ್ತದೆ.

ಅಲ್ಲದೆ ಯೊವಾನ್ನನ ಹೆಸರು ಉಲ್ಲೇಖವಾಗಬೇಕಾದೆಡೆಯೆಲ್ಲಾ ಆತನ ಹೆಸರನ್ನು ಮರೆಮಾಚಲಾಗಿದೆಯೊವಾನ್ನನು ಅಗತ್ಯವಾಗಿ ಇರಬೇಕಾದ ಸಂದರ್ಭಗಳು, ಘಟನೆಗಳು ಕೃತಿಯಲ್ಲೆಲ್ಲೂ  ಕಂಡುಬರುವುದಿಲ್ಲ.

ಯೇಸುವನ್ನು ಗೊಲ್ಗೊಥ ಬೆಟ್ಟದ ಮೇಲೆ ಶಿಲುಬೆಗೇರಿಸಿದಾಗ ಅವನು ಅಲ್ಲಿಗೆ ಹಾಜರಾಗಿದ್ದ. ಅದೇ ಕಾರಣಕ್ಕೆ ಇರಬಹುದೇನೋ ಯೇಸು ತಮ್ಮ ತಾಯಿಗೆ,  "ಅಮ್ಮಾ, ಇದೋ ನಿನ್ನ ಮಗನು," ಎಂದು ಹೇಳಿ ತಮ್ಮ ಆಪ್ತಶಿಷ್ಯನನ್ನು ತಾಯಿಗೆ ಒಪ್ಪಿಸುತ್ತಾರೆ. ಅಂತೆಯೇ ಯೊವಾನ್ನನಿಗೂ, "ಇದೋ ನಿನ್ನ ತಾಯಿ" ಎಂದು ತಮ್ಮ ಮಾತೆಯನ್ನು ಯೊವಾನ್ನನಿಗೆ ನೀಡುತ್ತಾರೆ. ಯೇಸುವಿನ ಮರಣಾನಂತರ ಅವರ ಮಾತೆ ಯೊವಾನ್ನನ ಮನೆಯಲ್ಲೇ ಉಳಿದುಕೊಳ್ಳುತ್ತಾರೆ.

ಹೀಗೆ ಯೇಸುವಿನ ಅಂತ್ಯಕಾಲದಲ್ಲಿ ಅವರ ಸನಿಹ ಇದ್ದ ಏಕೈಕ ಶಿಷ್ಯ ಯೊವಾನ್ನ. ಒಂದು ರೀತಿಯಲ್ಲಿ ಯೊವಾನ್ನನು ಯೇಸುವಿನ ಉತ್ತರಾಧಿಕಾರಿಯಂತೆ ಕಂಡು ಬರುತ್ತಾನೆ. ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಅತ್ಯಂತ ಆಪ್ತರಾದ ಶಿಷ್ಯರು ಮೂರು ಮಂದಿ. ಪೇತ್ರನೆನಿಸಿಕೊಳ್ಳುವ ಸಿಮೋನ, 'ಸಿಡಿಲಮರಿ'ಗಳೆಂದು ಪ್ರಖ್ಯಾತರಾದ ಯಕೋಬ ಮತ್ತು ಯೊವಾನ್ನರೇ ಮೂವರು. ವಿಶೇಷ ಸಂದರ್ಭಗಳಲ್ಲಿ ಉಳಿದ ಶಿಷ್ಯರುಗಳಿಗೆ ಪ್ರವೇಶವಿಲ್ಲದೆಡೆ ಮೂವರಿಗೆ ಪ್ರವೇಶವಿರುತ್ತಿತ್ತುಯೇಸುವು ಎತ್ತರವಾದ ಬೆಟ್ಟದ ಮೇಲೆ ರೂಪಾಂತರ ಹೊಂದುವಾಗ ಅವರ ಸನಿಹವಿದ್ದವರು ಇವರೇ. ಯಾಯಿರನ ಮಗಳು ತೀರಿಹೋದಾಗ ಅವರ ಮನೆಯೊಳಕ್ಕೆ ಯೇಸುವು ಪ್ರವೇಶಿಸುವಾಗ ತಮ್ಮೊಡನೆ ಕರೆದುಕೊಂಡು ಹೊರಟದ್ದೂ ಮೂವರನ್ನೇ! ಅದೇ ರೀತಿಯಲ್ಲಿ ಗೆತ್ಸೆಮನೆ ತೋಪಿನಲ್ಲಿ ಯೇಸು ತಮ್ಮ ಶಿಷ್ಯರಿಗೆ, "ನಾನು ಪ್ರಾರ್ಥನೆ ಮಾಡಿ ಬರುವವರೆಗೆ ನೀವು ಇಲ್ಲೇ ಕುಳಿತಿರಿ," ಎಂದು ಶಿಷ್ಯರಿಗೆ ಹೇಳಿ ತಮ್ಮೊಡನೆ ಕರೆದುಕೊಂಡು ಹೊರಟಿದ್ದೂ ಮೂವರನ್ನೇ. ಯೊವಾನ್ನನಂತೂ ಯೇಸುವಿಗೆ ಎಷ್ಟು ಆಪ್ತನಾಗಿದ್ದನೆಂದರೆ, ಅಂತಿಮ ಭೋಜನದ ವೇಳೆಯಲ್ಲಿ ತಮ್ಮನ್ನು ತಮ್ಮ ಶಿಷ್ಯವರ್ಗದಲ್ಲೇ ಓರ್ವನು ಶತ್ರುಗಳ ಕೈವಶ ಮಾಡುತ್ತಾನೆಂದು ಯೇಸು ಶಿಷ್ಯರಿಗೆ ಹೇಳುತ್ತಿದ್ದ ವೇಳೆಯಲ್ಲಿ ಅವರ ಎದೆಗೆ ಒರಗಿ ಕುಳಿತಿದ್ದ ಎಂಬ ವರ್ಣನೆ ಶುಭಸಂದೇಶದಲ್ಲಿದೆ.

ಯೇಸುವನ್ನು ಸಮಾಧಿ ಮಾಡಲಾದ ಮೂರನೆಯ ದಿನ ಯೇಸು ಪುನರುತ್ಥಾನರಾದರೆಂಬ ವಿಷಯ ತಿಳಿದು ಬಂದಾಗ ಪೇತ್ರನನ್ನು ಹಿಂದಿಕ್ಕಿ ಸಮಾಧಿಯ ಬಳಿಗೆ ಓಡಿಬಂದವನು ಯೊವಾನ್ನ. ಇದೇ ಯೊವಾನ್ನನು ಯೇಸುವಿನ ಶಿಷ್ಯನಾಗಿ ಸ್ವೀಕಾರವಾಗುವ ಮೊದಲು ಸ್ನಾನಿಕ ಯೊವಾನ್ನನ ಶಿಷ್ಯನಾಗಿದ್ದನೆಂಬುದು ಗಮನಾರ್ಹ. ಆದರೆ ಯೊವಾನ್ನನು ತನ್ನ ಸುಸಂದೇಶದ ಕೃತಿಯನ್ನು ರಚಿಸಿದ್ದು ಮಾತ್ರ ತನ್ನ ಮುಪ್ಪಿನಲ್ಲಿ. ವೇಳೆಗಾಗಲೇ ಮತ್ತಾಯ, ಮಾರ್ಕ ಮತ್ತು ಲೂಕರು ಸುಸಂದೇಶಗಳನ್ನು ಬರೆದು ಮುಗಿಸಿದ್ದರು. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಯೊವಾನ್ನನು ತನ್ನಸುಸಂದೇಶ' ಕೃತಿಗೂ ಮುಂಚೆಯೇ 'ಪ್ರಕಟಣೆ' ಎಂಬ ಕೃತಿಯನ್ನು ಬರೆದಿದ್ದನೆಂಬುದು. ವೇಳೆ(ಡೊಮಿಶಿಯನ್ಚಕ್ರವರ್ತಿಯ ಆಡಳಿತದ ಅವಧಿ)ಯಲ್ಲಿ ಗಡಿಪಾರಾಗಿದ್ದ ಯೊವಾನ್ನನು ಪಾತ್ಮೋಸ್ಎಂಬ ದ್ವೀಪದಲ್ಲಿದ್ದ. ಅಲ್ಲಿ ಕಂಡ 'ದಿವ್ಯದರ್ಶನ'ಗಳಿಗೆ ಅವನು ಕೃತಿಯರೂಪವನ್ನು ನೀಡಿದ್ದ. ಕೃತಿಯು ಮುಕ್ತಾಯ ಘಟ್ಟ(ಕ್ರಿ.. 96)ವನ್ನು ತಲುಪುತಿದ್ದಂತೆಯೇ ಕ್ರೈಸ್ತರಿಗೆ ಅಮಾನುಷವಾಗಿ ಕಿರುಕುಳವನ್ನು ನೀಡುತ್ತಿದ್ದ ಚಕ್ರವರ್ತಿ ಡೊಮಿಶಿಯನ್ ಹತ್ಯೆಯಾಗುತ್ತದೆ. ಅವನ ನಂತರ ಚಕ್ರವರ್ತಿಯಾದ ನೆರ್ವೋನ ಅವಧಿಯಲ್ಲಿ ಬಿಡುಗಡೆಯಾಗುವ ಯೊವಾನ್ನ ಎಫೆಸವನ್ನು ತಲುಪುತ್ತಾನೆ. ಅಲ್ಲಿಯೇ ತನ್ನ ಜೀವಿತಾವಧಿಯ ಕೊನೆಯ ದಿನಗಳನ್ನು ದೂಡಿದನಲ್ಲದೆ 'ಸುಸಂದೇಶ'ವನ್ನು (ಕ್ರಿ.. 98ರಲ್ಲಿ) ರಚಿಸುತ್ತಾನೆ. 'ಸುಸಂದೇಶ'ವನ್ನೂ, ಅದರೊಂದಿಗೆ ಎರಡು ಚುಟುಕಾದ ಹಾಗೂ ಮತ್ತೊಂದು ದೀರ್ಘವಾದ 'ಪತ್ರ'ವನ್ನೂ ಬರೆದು ಮುಗಿಸಿದ ಬಳಿಕ ನಿಶ್ಚಿಂತೆಯಿಂದ ಯೊವಾನ್ನನು ಕಾಲವಶನಾಗುತ್ತಾನೆ. ಯೊವಾನ್ನನು ಮರಣಿಸಿದ್ದು ಕ್ರಿ.. 100ರಲ್ಲಿ; ಅದು ಚಕ್ರವರ್ತಿ ಟ್ರಾಜಾನನ ಆಳ್ವಿಕೆಯ ಮೂರನೆಯ ವರ್ಷ.

ಇತರ ಸುಸಂದೇಶಕರ್ತರಂತೆಯೇ ಯೊವಾನ್ನನು ಸಹ ತನ್ನ ಕೃತಿಗಳಲ್ಲಿ ತನ್ನ ಹೆಸರನ್ನೆಲ್ಲೂ ಸೂಚಿಸಿಲ್ಲ. ಆದರೆ ಕೃತಿಗಳಲ್ಲಿ ತಿಳಿದೋ, ತಿಳಿಯದೆಯೋ ಬಿಡುವ ಕೆಲವು ಸುಳಿವುಗಳ ಆಧಾರದಿಂದಲೇ ಕೃತಿಗಳ ರಚನಾಕಾರರು ಯಾರೆಂಬುದನ್ನು ತಿಳಿಯಲು ಸಾಧ್ಯ! ಅಂತೆಯೇ ತನ್ನ ಕೃತಿಯಲ್ಲೂ ಯೊವಾನ್ನನು ಹಲವು ಸುಳಿವುಗಳನ್ನು ನೀಡಿದ್ದಾನೆ. ಅವುಗಳಲ್ಲಿ ಪ್ರಮುಖವಾದುದು ಇತರರ ಕೃತಿಗಳಲ್ಲಿ ಯೋವಾನ್ನನ ಹೆಸರು ಬರುವೆಡೆಗಳಲ್ಲಿ ತನ್ನ ಕೃತಿಯಲ್ಲಿ ಯೇಸುವಿನ ಆಪ್ತ ಎಂದಷ್ಟೆ ಹೇಳಿರುವುದು.


ದಶಂಬರ್‌ 27ರಂದು ಈ ಸಂತನ ಹಬ್ಬವನ್ನು ಆಚರಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ